ಲಘು ಬರಹ
ಮಧ್ಯಮ ತಾನಧಮನು
ರವಿವಾರ ಬಂತಂದ್ರ ಒಳಗೊಳಗೇ ಒಂದು ಖುಶಿ. ಎಷ್ಟೊತ್ತಿಗಾದರೂ ಎದ್ದು, ಮನಸ್ಸಿಗೆ ಬಂಧಂಗ ಕೆಲಸಾ ಮಾಡಕೋತ, ಇಲ್ಲಾ ಮಾಡಿಧಂಗ ಮಾಡಕೋತ, ಇಲ್ಲಾ ಆಳಸಿತನದಿಂದ ಮಲಕೊಂಢಂಗ ಕುತಗೊಂಡು ಟಿ.ವಿ. ನೋಡಕೋತ, ನಡುನಡುವ ಪೇಪರ ಮ್ಯಾಲೆ ಕಣ್ಣು ಹಾಯಿಸಿಕೋತ, ಇಕಿ ಏನರೆ ಬೈಕೋತ ಆದ್ರೂ ಒಂದು ಕಪ್ಪು ಛಾ ಕೊಡೊ ಕೃಪಾ ಮಾಡತಾಳೇನೋ ಅಂತ ಅಡಗಿಮನಿ ಕಡೆ ಕಳ್ಳನೋಟ ಬೀರಕೋತ, ಇನ್ನ ಇವತ್ತೇನೇನು ನನ್ನ ಲೇಖನಿಯಿಂದ ಬರದು ಝಳಪಿಸಬೇಕಂತ ಲೆಕ್ಕಾಚಾರ ಹಾಕ್ಕೋತ, ..............ನಾನು ಹೀಂಗ ಆರಾಮಾಗಿ ಕೂತಾಗ ಒಂದೈದಾರು ಧಾಂಡಿಗ ಹುಡುಗೋರು ಮನಿವಳಗ ಕಾಲಿಟ್ಟರು. ನನ್ನ ಜೀವ ಫುಕುಫುಕು ಹೆದರಿ ಇಲಿ ಹಂಗ ಯಾವುದರೇ ಬಿಲಾ ಸಿಗತದೇನು ಅಂತ ನೋಡಲಿಕತ್ತು. ಬಂದಾವ್ರು, "ನಮಸ್ಕಾರ ಸಾ" ಅಂತ ಹೇಳಿಸಿಕೊಳ್ಳದನ ತಾವ ಸುಖಾಸೀನರಾದ್ರು. ನಾನು ಪಿಳಿಪಿಳಿ ಕಣ್ಣು ಬಿಟ್ಟು ಮುಂದೇನು ಗಂಡಾಂತರ ಕಾದದ ಅಂತ ನೋಡಲಿಕತ್ತೆ. "ಸಾ ನಮ್ಮ ಕಾಲನಿ ಯುವಕರ ಸಂಘದ ವಾರ್ಷಿಕೋತ್ಸವಕ್ಕ ನಿಮ್ಮನ್ನ ಮುಖ್ಯ ಅತಿಥಿ ಮಾಡಬೇಕಂತ ಮಾಡೇವಿ. ಮುಂದಿನ ಭಾನುವಾರ ಫಂಕ್ಷನ್ನು. ನೀವು ಬಂದು ಒಂದೆರಡು ಮಾತಾಡಬೇಕು ಸಾ" ಅಂದ್ರು. ನಂಗಂತೂ ಖುಶಿಯಿಂದ ಕುಪ್ಪಳಿಸೋ ಹಂಗ ಆತು. ಎಷ್ಟು ವರ್ಷದಿಂದ ಈ ಅಕ್ಷರಸೇವಾ, ಸಾಹಿತ್ಯಸೇವಾ ಮಾಡಕೋತ ಬಂದೇನಿ, ಮಕ್ಕಳು ಒಬ್ಬರರೇ ಗುರತಿಸಲಿಲ್ಲ. ಈಗ ಈ ಹುಡುಗೋರು ನನ್ನೊಳಗಿರೋ ಲೇಖಕನ್ನ ಗುರುತಿಸಿ ಕರೀಲಿಕ್ಕೆ ಬಂದಾರ, ಪಾಪ - - - ಹೋಗದನ ಇರಲಿಕ್ಕೆ ಆಗತದ? ಬರದು ಬರದು ನನ್ನ ಕೈಬೆರಳು ಸವದ ಹೋಗ್ಯಾವ, ಆದ್ರೂ ಈ ಪತ್ರಿಕೆಯವರಿಗೇನು ಸೊಕ್ಕು ಕಡಿಮಿ ಅಂತೀರೀ, - - - ಕಳಿಸಿದ ಕಥಿ, ಲೇಖನ, ಕವನ ಎಲ್ಲಾ ಹಂಗ ಇಟಗೊಂಡು ಕೂಡತಾರ, ಇಲ್ಲಾ ಅಲ್ಲೇ ಕಾಲಕೆಳಗ ಇರೊ ಕಸದ ಬುಟ್ಯಾಗ ಹಾಕತಾರ, ಹೊರತೂ ಸ್ವೀಕೃತ, ಅಸ್ವೀಕೃತ ಅಂತ ಒಂದು ಮಾತು ತಿಳಸಿದ್ರ ಕೇಳ್ರಿ. ಮತ್ತ ಮ್ಯಾಲೆ ಸಂಪಾದಕರ ನಿರ್ಣಯನ s ಅಂತಿಮ ಅಂತ ಹೇಳಿ ಶರಾ ಬರದಬಿಡ್ತಾರ, ಕೇಳೋ ಹಕ್ಕು ನಿಮಗಿಲ್ಲ, ಹೇಳೋ ದರ್ದು ನಮಗಿಲ್ಲ ಅಂತ ಅದರರ್ಥ. ಆದರೂ ಛಲ ಬಿಡದ ತ್ರಿವಿಕ್ರಮನ ಹಂಗ ನಾನೂ ಬರದ-ಬರದ ಕಳಸೇ ಕಳಸ್ತೇನಿ. ಎಲ್ಲೋ ಒಂದೆರಡು ಲೇಖನ ಪ್ರಕಟ ಆಗ್ತಾವ, ಇನ್ನಿಪ್ಪತ್ತು ಕ.ಬು. ಸೇರಿರ್ತಾವ. ಈಗೀಗ ಈ ಫೇಸಬುಕ್ಕ ಒಂದಾಗಿ ಭಾಳ ಛೊಲೊ ಆಗೇದ ನೋಡ್ರಿ. ಯಾರು ಓದ್ಲಿ, ಬಿಡ್ಲಿ, ನಮ್ಮಷ್ಟಕ್ಕ ನಾವು ಬರದದ್ದನ್ನ ಪೋಸ್ಟ್ ಮಾಡಿ ಥಣ್ಣಗ ಕುತಗೊಂಡುಬಿದೋದು, ಓದೋದು ಬಿಡೋದು ಮಂದಿ ಕರ್ಮ. ಏನೋ ಓದ್ಯರೆ, ಓದದನ ಅರೆ, ಒಂದು ಲೈಕ್ ಕುಟ್ಟಿದರ ಇವರ ಗಂಟೇನ ಹೋಗ್ತದ ಹೇಳ್ರಿ, ಆದ್ರೂ ಕುಟ್ಟಂಗಿಲ್ಲ, ಹರಾಮ ನನ್ನ ಮಕ್ಕಳು. ಆದ್ರ ಹಂಗಂತ ಯಾರಿಗೂ ಕುಟ್ಟಂಗಿಲ್ಲ ಅನಕೋಬ್ಯಾಡ್ರಿ, ಕೆಲವರಿಗೆ ಫೇಸಬುಕ್ಕಿನ್ಯಾಗೂ ಭಾರೀ ಬೇಡಿಕಿ ಅದ. ಅವ್ರು ಏನ ಬರೀಲಿ, ಹೆಂಥಾ ಕತ್ತಿಮಾರಿ ಫೋಟೊ ಹಾಕಲಿ, ಪಟಾಪಟಾಂತ ನೂರು, ಎರಡ್ನೂರು ಲೈಕ್ ಬಂದ ಬಿದ್ದಿರತಾವ. ಆದ್ರೂ ನಾನೂ ಎನು ಸೋಲೋ ಆಸಾಮಿ ಅಲ್ಲ. "ಕರ್ಮಣ್ಯೆ ವಾ ಅಧಿಕಾರಸ್ತೆ, ಮಾ ಫಲೇಶು ಕದಾಚನ" ಅಂತ ಸಂಪೂರ್ಣ ನಂಬಿಕಿ ಇಟ್ಟು ನಾ ಬರದದ್ದನ್ನೆಲ್ಲಾ ಪೋಸ್ಟ್ ಮಾಡಕೋತನ ಇರತೇನಿ. ಅದರ ಫಲಾ ನೋಡ್ರಿ ಇವತ್ತ ಈ ಹುಡುಗೋರು ನನ್ನ ಚೀಫ್ ಗೆಸ್ಟ್ ಮಾಡಬೇಕಂತ ಬಂದಾರ. ಮಾರ್ಕ್ ಝುಕರಬರ್ಗ್ ನಿನಗೊಂದು ಪ್ರಣಾಮ ಅಂತ ಮನಸ್ಸಿನ್ಯಾಗ ಅನಕೊಂಡು ಖುಶಿ ಮುಖದ ಮ್ಯಾಲೆ ಧಿಮಿಧಿಮಿ ಅಂತ ಕಾಣಿಸಿಕೊಳ್ಳಿಕ್ಕೆ ಒದ್ದಾಡತಿದ್ರೂ ಭಾಳ ಪ್ರಯತ್ನ ಪಟ್ಟು ಗಂಭೀರ ವದನನಾಗಿ "ಅವತ್ತ ನನಗೇನರೆ ಬ್ಯಾರೆ ಫಂಕ್ಷನ್ನು ಅದ ಏನು ನೋಡತೇನಿ ತಡ್ರಿ" ಅಂತ ಹೇಳಿ ಡೈರಿ ಪುಟಗೋಳ್ನ ಅಕಡಿಕಡೆ ಸುಮ್ಮನ ತಿರವಿ, "ಹೂಂ, ಲಕ್ಕಿಲಿ ಅವತ್ತ ಏನೂ ಕಾರ್ಯಕ್ರಮ ಇಲ್ರೆಪಾ, ಎಷ್ಟೊತ್ತಿಗೆ ನಿಮ್ಮ ಕಾರ್ಯಕ್ರಮಾ" ಅಂತ ಹಗೂರಾಗಿ, ಪರೋಕ್ಷವಾಗಿ ಒಪ್ಪಿಗಿ ಕೊಟ್ಟಬಿಟ್ಟೆ. ಭಾಳ ಭಾವ ಹೊಡಿಲಿಕತ್ತರ ಇವರೂ ಇನ್ನೊಬ್ಬ ಫೇಸಬುಕ್ಕ ರೈಟರನ್ನ ಹುಡಿಕ್ಕೊಂಡು ಹೋದರ ಏನ್ಮಾಡಲಿ? ಮದ್ಲ ಈಗಂತೂ ಗಲ್ಲಿ ಒಳಗ ಹತ್ತ ಜನಾ ಲೇಖಕರು ಹುಟಗೊಂಡಾರ, ಇದ s ಮಾರ್ಕ್ ಝುಕರಬರ್ಗ್ ಮಹಾಶಯನ ಕೃಪಾದಿಂದ.
ಇನ್ನೇನು ಎಲ್ಲಾ ಮುಗೀತು, ನನ್ನ ಭಾಷಣ ಫಿಕ್ಸ್ ಆತು ಅನ್ನೋದರೊಳಗ, "ಸಾ s ಒಂದ ಪ್ರಶ್ನೆ, ನೀವು ಎಡಾನೋ, ಬಲನೋ ಗೊತ್ತಾಗಲಿಲ್ಲ" ಹುಡುಗ ಒಬ್ಬ ಕೇಳಿದ. ಈ ಯುವಕ ಮಂಡಳದ ಅಧ್ಯಕ್ಷನ ಇರಬೇಕು ಅನಿಸ್ತು ನನಗ. "ನಾನು ಎಡಾನೂ ಅಲ್ಲ, ಬಲಾನೂ ಅಲ್ಲ. ಒಂದ ರೀತಿ ಮಧ್ಯಮ ಮಾರ್ಗಿ" ಅಂದೆ ಭಾರಿ ಹೆಮ್ಮೆಯಿಂದ. ಆದರ ಅಧ್ಯಕ್ಷನ ಮಾರಿ ಸಪ್ಪಗಾತು, "ಸಾರ್, ನೀವು ಯಾವದೂ ಕಡೆ ಇಲ್ಲ ಅಂದ್ರ ಹೆಂಗರೀ ಸಾರ್? ಇಲ್ಲಾ ಎಡಕ್ಕ ಇರಬೇಕು, ಇಲ್ಲ ಬಲಕ್ಕಿರಬೇಕು, ಈ ಮಧ್ಯಮ ಮಾರ್ಗ ಅನ್ನೋದು ಇಲ್ಲೇ ಇಲ್ರಿ ಸರ್". ನಾನೂ ಬಿಡಲಿಲ್ಲ, "ಇಲ್ಲಪಾ ತಮ್ಮಾ ನಾನು ಸೀದಾಸಾದಾ ಮನಷ್ಯಾ, ಸುಮ್ನ ಖುಶಿಗೆ ಒಂದಿಷ್ಟು ಹಾಸ್ಯಲೇಖನ, ಪ್ರಬಂಧ, ಕಥಿ, ಕವನಾ ಬರ್ಯಾಂವ, ನನಗೆಂಥಾ ಎಡಾ-ಬಲಾ" ಅಂತ ಅವನ್ನ s ಕೇಳಿದೆ. "ಸಾ ನೀವು ಹಿಂಗ ಹೇಳಲಿಕ್ಕೇ ಬರಂಗಿಲ್ಲರಿ, ಯಾವದರೆ ಒಂದ ಕಡೆ ಇದ್ದೇನಿ ಅಂತ ನೀವು ಡಿಕ್ಲೇರ್ ಮಾಡಕೊಳ್ಳಲಿಲ್ಲಾ ಅಂದ್ರ ನಿಮ್ಮನ್ಯಾರು ಲೇಖಕರು ಅಂತಾರ್ರಿ ಸಾರ್" , ಅವನೂ ಒಂದು ಪ್ರಶ್ನಿ ಒಗದ ಕೂತಾ, ಈಗ ಉತ್ತರಾ ಕೊಡ್ರಿ ನೋಡೋಣು ಅಂತ.
"ತಮ್ಮಾ ನಾನು ಇಲ್ಲೇ ಸುತ್ತಮುತ್ತಲೂ ಕಾಣಸೋ ಸಣ್ಣಪುಟ್ಟ ವಿಷಯಗಳನ್ನ, ಜನರನ್ನ ನೋಡಿ ಹಾಸ್ಯ ಲೇಖನಾ ಬರೀತೇನಿ. ಒಂದಿಷ್ಟು ಪ್ರೇಮಕವನಗಳು, ಒಮ್ಮೊಮ್ಮೆ ಕಥಿ-ಗಿಥಿ ಬರೀತೇನಿ. ಪ್ರೀತಿ-ಪ್ರೇಮನ ಹೆಚ್ಚಾಗಿ ನನ್ನ ಬರಹದ ವಸ್ತು ಆಗಿರ್ತದ" ಅಂತಂದು ಕಾಲಮ್ಯಾಲೆ ಕಾಲು ಹಾಕ್ಕೊಂಡು ಆರಾಮಾಗಿ ಕೂತೆ. ಈಗರೇ ಇವ್ರಿಗೆ ಖುಶಿ ಆಗಬಹುದು, ಎಷ್ಟs ಅಂದ್ರೂ ಹರೇದ ಹುಡುಗರು, ಪ್ರೀತಿ-ಪ್ರೇಮಾ ಅಂದ್ರ ಸಾಯತಾರ. ಆದ್ರ ಹುಡುಗೋರು ಒಬ್ಬರನೊಬ್ರು ನೋಡಕೊಂಡು ಖಿಸಿಖಿಸಿ ನಗಲಿಕತ್ರು. ಇನ್ನೊಬ್ಬ ಹುಡುಗ ಇನ್ನೂ ನಗಿ ತಡೀಲಾರದ ಒದ್ಯಾಡಕೋತ ಹೇಳಿದ, "ಸರ್ ಈಗೆಲ್ಲ ಯಾರು ಲವ್ವು-ಗಿವ್ವು ಅಂತ ಬರದಿರೋ ಕಥಿ ಓದ್ತಾರ ಸರ್, ಅವೆಲ್ಲಾ ಸುಮ್ಮಸುಮ್ಮನ ಟೈಮಪಾಸ್. ಇಕಿ ಮೊಬೈಲಿಗೆ ಕರನ್ಸಿ ಹಾಕ್ಸಿದ್ರ ಇಕಿ ಗರ್ಲ್ ಫ್ರೆಂಡ್ ಆಗ್ತಾಳ, ಅಕಿಗ ಹಾಕ್ಸಿದ್ರ ಅಕಿ ಆಗ್ತಾಳ. ಅಷ್ಟು ಸಿಂಪಲ್ ಸರ್. ಒಂದೆರಡು ವರ್ಷದ ನಂತರ ಇಬ್ಬರದೂ ಮದವಿ ಆಗ್ತದ, ಅವರವರ ಮನೆಯವ್ರು ನೋಡಿದ ವಧು ಅಥವಾ ವರನ ಜೋಡಿ. ಅಲ್ಲಿಗೆ ಲವ್ವಿನ ಪ್ರಥಮೋಧ್ಯಾಯ ಮುಗಿದು ದ್ವಿತಿಯೋಧ್ಯಾಯ ಪ್ರಾರಂಭ ಆಗ್ತದ. ನೀವು ಪಾಪ ಹಳೇ ಕಾಲದವ್ರು, ಇದೆಲ್ಲಾ ಲೇಟೆಸ್ಟ್ ಬೆಳವಣಿಗಿ ಗೊತ್ತಿಲ್ಲ ಕಾಣಸ್ತದ ನಿಮಗ" ಅಂತ ಕನಿಕರದಿಂದ ಲೊಚಗುಟ್ಟಿದ.
ಅಷ್ಟರಾಗ ಇನ್ನೊಬ್ಬ ಮಹಾಶಯ, "ಸಾರ್ ನೀವು ಎಡ ಪಂಥದೊಳಗಿದ್ರ ಪ್ರಶಸ್ತಿ, ಬಿರುದು-ಬಾವಲಿ ಒಳ್ಳೊಳ್ಳೆ ಹುದ್ದೆ, ಫಾರಿನ್ ಟೂರು ಎಲ್ಲಾ ಸಿಗ್ತಾವ. ಪೇಪರಿನವ್ರು, ಟಿ.ವಿ. ಅವ್ರು ಭಾಳ ಭಯಂಕರ ಪ್ರಚಾರ ಕೊಡ್ತಾರ, ನಿಮಗಂತೂ ಏನೇನೂ ಖರ್ಚಿಲ್ಲ, ಎಲ್ಲಾ ತಾನಾಗೇ ಬಂದು ನಿಮ್ಮ ಕಾಲಬುಡಕ ಬೀಳ್ತದ. ನಿಮ್ಮನ್ನ ಕಂಡಕಂಡ ಕಾರ್ಯಕ್ರಮಗಳಿಗೆ ಮುಖ್ಯ ಅತಿಥಿ ಅಂತ ಕರದು ಶಾಲು, ಸ್ಮರಣಿಕೆ, ಕಾಣಿಕೆ ಅಂತೆಲ್ಲ ಕೊಡತಾರ. ಟಿ.ಎ, ಡಿ.ಎ. ಅಂತೂ ಇಂಪ್ಲೈಡ್ ಅಂತ ತಿಳ್ಕೋರಿ. ಯಾರಿಗುಂಟು ಯಾರಿಗಿಲ್ಲ ಸರ್. ನೀವು ಒಂದು ಸ್ಟೇಟಮೆಂಟು ಕೊಟ್ಟು ನೋಡ್ರಿ, ಹ್ಯಾಂಗ ಚೇಂಜ್ ಆಗ್ತದ ನಿಮ್ಮ ಹಣೆಬರಹ" ಭಾಳ ದೊಡ್ಡ ಲೆಕ್ಚರ್ ಕೊಟ್ಟ ಮಹರಾಯಾ! ನನ್ನ ಹೆಂಡ್ತಿ ಒಳಗಿಂದನ ನನ್ನ ಕಡೆ ದುರುಗುಟ್ಟಿಕೊಂಡು ನೋಡಲಿಕತ್ಲು, ಏನೇನೂ ಗೊತ್ತಿಲ್ಲ ಈ ಪ್ರಾಣಿಗೆ, ಎಂಥಾ ಲೇಖಕನೋ ಏನೋ ಅಂತ ಸಿಟ್ಟ ಬಂದಿರಬೇಕು. ಇನ್ನು ಇವ್ರು ಹೊರಗ ಹೋಗೋದಕ್ಕೂ ಒಳಗಿಂದ ತಿವಿತಾಳ ನನ್ನ.
ಇನ್ನೊಬ್ಬ ಹುಡುಗ ಈಗ ಶುರು ಮಾಡಿದ, "ಸರ್, ನಿಮಗ ಎಡಾ ಬ್ಯಾಡಂದ್ರ ಬಲಕ್ಕ ಹೋಗ್ರಿ, ಅಲ್ಲೂ ಫಾಯದೇನ ಅದ. ನೀವೇನರೆ ಒಂದು ಸ್ಟೇಟಮೆಂಟ್ ಕೊಟ್ಟು ನೋಡ್ರಿ, ಅಥವಾ ಒಂದು ಸಣ್ಣ ಲೇಖನಾ ಬರೀರಿ. ಎಡದಾವ್ರು ನಿಮ್ಮ ಹೆಸರಿನ ಸಹಸ್ರ ನಾಮಾವಳಿ ತೊಗೊಂಡು ಉಗದು ಉಪ್ಪಿನಕಾಯಿ ಹಾಕಾತಾರ, ಲಟಲಟಾಂತ ಮಾತಿಗೊಮ್ಮೆ ಅದನ್ನs ನೆಂಜಿಕೋತಾರ. ಆಗ ತಾನ ತಾನಾಗಿ ನಿಮ್ಮ ಹೆಸರಿಗೆ ಒಂದು ಪಾಪ್ಯುಲ್ಯಾರಿಟಿ ಅಂಟಕೊಂಡಬಿಡತದ, ಫೆವಿಕಾಲಿನಂಗ, ನೀವು ಬಿಟ್ಟರೂ ಆಮ್ಯಾಲದು ನಿಮ್ಮನ್ನ ಬಿಡಂಗಿಲ್ಲ. ಒಟ್ಟು ತಾತ್ಪರ್ಯ ಏನಪಾ ಅಂದ್ರ ಇಲ್ಲಾ ಎಡಕ್ಕ ಬರ್ರಿ, ಇಲ್ಲಾ ಬಲಕ್ಕ ಹೋಗ್ರಿ, ಈ ಮಧ್ಯಮ ಮಧ್ಯಮ ಅನಕೋತ ಕೂತ್ರಿ, ಸತ್ರಿ ನೀವು" ಅಂತ ತನ್ನ ಭಾಷಣಾ ಮುಗಿಸಿದಾ.
"ಹುಡುಗುರ್ಯಾ, ಖರೆ ಹೇಳಬೇಕಂದ್ರ ನನಗಿಂತ ನೀವs ಎಲ್ಲಾರೂ ಛೊಲೊ ಭಾಷಣಾ ಮಾಡತೀರಿ. ನನಗಿಂತಾ ಹೆಚ್ಚು ತಿಳವಳಿಕಿನೂ ನಿಮಗ ಅದ. ಇನ್ನ ನಾ ಬಂದ ಹೇಳೋದೇನು ಉಳದದ ಹೇಳ್ರಿ. ನೀವs ನನ್ನ ಗುರುಗೋಳು ಆಧಂಗ ಆದ್ರಿ. ಇನ್ನ ನಾ ಯಾವದರೇ ಒಂದ ಕಡೆ ಹೋಗಲಿಕ್ಕೆ ಡಿಸೈಡ್ ಮಾಡಬೇಕಲಾ" ಅಂದೆ. ಅವರೆಲ್ಲಾ ಖುಶಿಯಿಂದ "ಮಾಡ್ರಿ, ಮಾಡ್ರಿ, ಸರ್, ಮುಂದಿನ ರವಿವಾರದೊಳಗ ನೀವು ಯಾವದರೇ ಒಂದು ಬಣಕ್ಕ ಸೇರಕೊಳ್ರಿ, ನಾವು ಬಂದು ನಿಮ್ಮನ್ನ ಭಾಷಣಕ್ಕ ಕರಕೊಂಡು ಹೋಗ್ತೇವಿ" ಅಂತ ಎದ್ರು. ನಾನು ಬೆಂಕಿಯಲ್ಲಿ ಅರಳಿದ ಹೂವು ಸಿನಮಾದೊಳಗ ಸುಂದರ ರಾಜ ಮಾಡಿಧಂಗ ಎಡಗೈಯಿಂದ ಬಲಗೈ, ಬಲಗೈಯಿಂದ ಎಡಗೈ ಮುಟಗೋತ ಯಾವದು ಸರಿ ಆಗಬಹುದು ಅಂತ ವಿಚಾರ ಮಾಡಲಿಖತ್ತೆ.
ಇನ್ನೇನು ಎಲ್ಲಾ ಮುಗೀತು, ನನ್ನ ಭಾಷಣ ಫಿಕ್ಸ್ ಆತು ಅನ್ನೋದರೊಳಗ, "ಸಾ s ಒಂದ ಪ್ರಶ್ನೆ, ನೀವು ಎಡಾನೋ, ಬಲನೋ ಗೊತ್ತಾಗಲಿಲ್ಲ" ಹುಡುಗ ಒಬ್ಬ ಕೇಳಿದ. ಈ ಯುವಕ ಮಂಡಳದ ಅಧ್ಯಕ್ಷನ ಇರಬೇಕು ಅನಿಸ್ತು ನನಗ. "ನಾನು ಎಡಾನೂ ಅಲ್ಲ, ಬಲಾನೂ ಅಲ್ಲ. ಒಂದ ರೀತಿ ಮಧ್ಯಮ ಮಾರ್ಗಿ" ಅಂದೆ ಭಾರಿ ಹೆಮ್ಮೆಯಿಂದ. ಆದರ ಅಧ್ಯಕ್ಷನ ಮಾರಿ ಸಪ್ಪಗಾತು, "ಸಾರ್, ನೀವು ಯಾವದೂ ಕಡೆ ಇಲ್ಲ ಅಂದ್ರ ಹೆಂಗರೀ ಸಾರ್? ಇಲ್ಲಾ ಎಡಕ್ಕ ಇರಬೇಕು, ಇಲ್ಲ ಬಲಕ್ಕಿರಬೇಕು, ಈ ಮಧ್ಯಮ ಮಾರ್ಗ ಅನ್ನೋದು ಇಲ್ಲೇ ಇಲ್ರಿ ಸರ್". ನಾನೂ ಬಿಡಲಿಲ್ಲ, "ಇಲ್ಲಪಾ ತಮ್ಮಾ ನಾನು ಸೀದಾಸಾದಾ ಮನಷ್ಯಾ, ಸುಮ್ನ ಖುಶಿಗೆ ಒಂದಿಷ್ಟು ಹಾಸ್ಯಲೇಖನ, ಪ್ರಬಂಧ, ಕಥಿ, ಕವನಾ ಬರ್ಯಾಂವ, ನನಗೆಂಥಾ ಎಡಾ-ಬಲಾ" ಅಂತ ಅವನ್ನ s ಕೇಳಿದೆ. "ಸಾ ನೀವು ಹಿಂಗ ಹೇಳಲಿಕ್ಕೇ ಬರಂಗಿಲ್ಲರಿ, ಯಾವದರೆ ಒಂದ ಕಡೆ ಇದ್ದೇನಿ ಅಂತ ನೀವು ಡಿಕ್ಲೇರ್ ಮಾಡಕೊಳ್ಳಲಿಲ್ಲಾ ಅಂದ್ರ ನಿಮ್ಮನ್ಯಾರು ಲೇಖಕರು ಅಂತಾರ್ರಿ ಸಾರ್" , ಅವನೂ ಒಂದು ಪ್ರಶ್ನಿ ಒಗದ ಕೂತಾ, ಈಗ ಉತ್ತರಾ ಕೊಡ್ರಿ ನೋಡೋಣು ಅಂತ.
"ತಮ್ಮಾ ನಾನು ಇಲ್ಲೇ ಸುತ್ತಮುತ್ತಲೂ ಕಾಣಸೋ ಸಣ್ಣಪುಟ್ಟ ವಿಷಯಗಳನ್ನ, ಜನರನ್ನ ನೋಡಿ ಹಾಸ್ಯ ಲೇಖನಾ ಬರೀತೇನಿ. ಒಂದಿಷ್ಟು ಪ್ರೇಮಕವನಗಳು, ಒಮ್ಮೊಮ್ಮೆ ಕಥಿ-ಗಿಥಿ ಬರೀತೇನಿ. ಪ್ರೀತಿ-ಪ್ರೇಮನ ಹೆಚ್ಚಾಗಿ ನನ್ನ ಬರಹದ ವಸ್ತು ಆಗಿರ್ತದ" ಅಂತಂದು ಕಾಲಮ್ಯಾಲೆ ಕಾಲು ಹಾಕ್ಕೊಂಡು ಆರಾಮಾಗಿ ಕೂತೆ. ಈಗರೇ ಇವ್ರಿಗೆ ಖುಶಿ ಆಗಬಹುದು, ಎಷ್ಟs ಅಂದ್ರೂ ಹರೇದ ಹುಡುಗರು, ಪ್ರೀತಿ-ಪ್ರೇಮಾ ಅಂದ್ರ ಸಾಯತಾರ. ಆದ್ರ ಹುಡುಗೋರು ಒಬ್ಬರನೊಬ್ರು ನೋಡಕೊಂಡು ಖಿಸಿಖಿಸಿ ನಗಲಿಕತ್ರು. ಇನ್ನೊಬ್ಬ ಹುಡುಗ ಇನ್ನೂ ನಗಿ ತಡೀಲಾರದ ಒದ್ಯಾಡಕೋತ ಹೇಳಿದ, "ಸರ್ ಈಗೆಲ್ಲ ಯಾರು ಲವ್ವು-ಗಿವ್ವು ಅಂತ ಬರದಿರೋ ಕಥಿ ಓದ್ತಾರ ಸರ್, ಅವೆಲ್ಲಾ ಸುಮ್ಮಸುಮ್ಮನ ಟೈಮಪಾಸ್. ಇಕಿ ಮೊಬೈಲಿಗೆ ಕರನ್ಸಿ ಹಾಕ್ಸಿದ್ರ ಇಕಿ ಗರ್ಲ್ ಫ್ರೆಂಡ್ ಆಗ್ತಾಳ, ಅಕಿಗ ಹಾಕ್ಸಿದ್ರ ಅಕಿ ಆಗ್ತಾಳ. ಅಷ್ಟು ಸಿಂಪಲ್ ಸರ್. ಒಂದೆರಡು ವರ್ಷದ ನಂತರ ಇಬ್ಬರದೂ ಮದವಿ ಆಗ್ತದ, ಅವರವರ ಮನೆಯವ್ರು ನೋಡಿದ ವಧು ಅಥವಾ ವರನ ಜೋಡಿ. ಅಲ್ಲಿಗೆ ಲವ್ವಿನ ಪ್ರಥಮೋಧ್ಯಾಯ ಮುಗಿದು ದ್ವಿತಿಯೋಧ್ಯಾಯ ಪ್ರಾರಂಭ ಆಗ್ತದ. ನೀವು ಪಾಪ ಹಳೇ ಕಾಲದವ್ರು, ಇದೆಲ್ಲಾ ಲೇಟೆಸ್ಟ್ ಬೆಳವಣಿಗಿ ಗೊತ್ತಿಲ್ಲ ಕಾಣಸ್ತದ ನಿಮಗ" ಅಂತ ಕನಿಕರದಿಂದ ಲೊಚಗುಟ್ಟಿದ.
ಅಷ್ಟರಾಗ ಇನ್ನೊಬ್ಬ ಮಹಾಶಯ, "ಸಾರ್ ನೀವು ಎಡ ಪಂಥದೊಳಗಿದ್ರ ಪ್ರಶಸ್ತಿ, ಬಿರುದು-ಬಾವಲಿ ಒಳ್ಳೊಳ್ಳೆ ಹುದ್ದೆ, ಫಾರಿನ್ ಟೂರು ಎಲ್ಲಾ ಸಿಗ್ತಾವ. ಪೇಪರಿನವ್ರು, ಟಿ.ವಿ. ಅವ್ರು ಭಾಳ ಭಯಂಕರ ಪ್ರಚಾರ ಕೊಡ್ತಾರ, ನಿಮಗಂತೂ ಏನೇನೂ ಖರ್ಚಿಲ್ಲ, ಎಲ್ಲಾ ತಾನಾಗೇ ಬಂದು ನಿಮ್ಮ ಕಾಲಬುಡಕ ಬೀಳ್ತದ. ನಿಮ್ಮನ್ನ ಕಂಡಕಂಡ ಕಾರ್ಯಕ್ರಮಗಳಿಗೆ ಮುಖ್ಯ ಅತಿಥಿ ಅಂತ ಕರದು ಶಾಲು, ಸ್ಮರಣಿಕೆ, ಕಾಣಿಕೆ ಅಂತೆಲ್ಲ ಕೊಡತಾರ. ಟಿ.ಎ, ಡಿ.ಎ. ಅಂತೂ ಇಂಪ್ಲೈಡ್ ಅಂತ ತಿಳ್ಕೋರಿ. ಯಾರಿಗುಂಟು ಯಾರಿಗಿಲ್ಲ ಸರ್. ನೀವು ಒಂದು ಸ್ಟೇಟಮೆಂಟು ಕೊಟ್ಟು ನೋಡ್ರಿ, ಹ್ಯಾಂಗ ಚೇಂಜ್ ಆಗ್ತದ ನಿಮ್ಮ ಹಣೆಬರಹ" ಭಾಳ ದೊಡ್ಡ ಲೆಕ್ಚರ್ ಕೊಟ್ಟ ಮಹರಾಯಾ! ನನ್ನ ಹೆಂಡ್ತಿ ಒಳಗಿಂದನ ನನ್ನ ಕಡೆ ದುರುಗುಟ್ಟಿಕೊಂಡು ನೋಡಲಿಕತ್ಲು, ಏನೇನೂ ಗೊತ್ತಿಲ್ಲ ಈ ಪ್ರಾಣಿಗೆ, ಎಂಥಾ ಲೇಖಕನೋ ಏನೋ ಅಂತ ಸಿಟ್ಟ ಬಂದಿರಬೇಕು. ಇನ್ನು ಇವ್ರು ಹೊರಗ ಹೋಗೋದಕ್ಕೂ ಒಳಗಿಂದ ತಿವಿತಾಳ ನನ್ನ.
ಇನ್ನೊಬ್ಬ ಹುಡುಗ ಈಗ ಶುರು ಮಾಡಿದ, "ಸರ್, ನಿಮಗ ಎಡಾ ಬ್ಯಾಡಂದ್ರ ಬಲಕ್ಕ ಹೋಗ್ರಿ, ಅಲ್ಲೂ ಫಾಯದೇನ ಅದ. ನೀವೇನರೆ ಒಂದು ಸ್ಟೇಟಮೆಂಟ್ ಕೊಟ್ಟು ನೋಡ್ರಿ, ಅಥವಾ ಒಂದು ಸಣ್ಣ ಲೇಖನಾ ಬರೀರಿ. ಎಡದಾವ್ರು ನಿಮ್ಮ ಹೆಸರಿನ ಸಹಸ್ರ ನಾಮಾವಳಿ ತೊಗೊಂಡು ಉಗದು ಉಪ್ಪಿನಕಾಯಿ ಹಾಕಾತಾರ, ಲಟಲಟಾಂತ ಮಾತಿಗೊಮ್ಮೆ ಅದನ್ನs ನೆಂಜಿಕೋತಾರ. ಆಗ ತಾನ ತಾನಾಗಿ ನಿಮ್ಮ ಹೆಸರಿಗೆ ಒಂದು ಪಾಪ್ಯುಲ್ಯಾರಿಟಿ ಅಂಟಕೊಂಡಬಿಡತದ, ಫೆವಿಕಾಲಿನಂಗ, ನೀವು ಬಿಟ್ಟರೂ ಆಮ್ಯಾಲದು ನಿಮ್ಮನ್ನ ಬಿಡಂಗಿಲ್ಲ. ಒಟ್ಟು ತಾತ್ಪರ್ಯ ಏನಪಾ ಅಂದ್ರ ಇಲ್ಲಾ ಎಡಕ್ಕ ಬರ್ರಿ, ಇಲ್ಲಾ ಬಲಕ್ಕ ಹೋಗ್ರಿ, ಈ ಮಧ್ಯಮ ಮಧ್ಯಮ ಅನಕೋತ ಕೂತ್ರಿ, ಸತ್ರಿ ನೀವು" ಅಂತ ತನ್ನ ಭಾಷಣಾ ಮುಗಿಸಿದಾ.
"ಹುಡುಗುರ್ಯಾ, ಖರೆ ಹೇಳಬೇಕಂದ್ರ ನನಗಿಂತ ನೀವs ಎಲ್ಲಾರೂ ಛೊಲೊ ಭಾಷಣಾ ಮಾಡತೀರಿ. ನನಗಿಂತಾ ಹೆಚ್ಚು ತಿಳವಳಿಕಿನೂ ನಿಮಗ ಅದ. ಇನ್ನ ನಾ ಬಂದ ಹೇಳೋದೇನು ಉಳದದ ಹೇಳ್ರಿ. ನೀವs ನನ್ನ ಗುರುಗೋಳು ಆಧಂಗ ಆದ್ರಿ. ಇನ್ನ ನಾ ಯಾವದರೇ ಒಂದ ಕಡೆ ಹೋಗಲಿಕ್ಕೆ ಡಿಸೈಡ್ ಮಾಡಬೇಕಲಾ" ಅಂದೆ. ಅವರೆಲ್ಲಾ ಖುಶಿಯಿಂದ "ಮಾಡ್ರಿ, ಮಾಡ್ರಿ, ಸರ್, ಮುಂದಿನ ರವಿವಾರದೊಳಗ ನೀವು ಯಾವದರೇ ಒಂದು ಬಣಕ್ಕ ಸೇರಕೊಳ್ರಿ, ನಾವು ಬಂದು ನಿಮ್ಮನ್ನ ಭಾಷಣಕ್ಕ ಕರಕೊಂಡು ಹೋಗ್ತೇವಿ" ಅಂತ ಎದ್ರು. ನಾನು ಬೆಂಕಿಯಲ್ಲಿ ಅರಳಿದ ಹೂವು ಸಿನಮಾದೊಳಗ ಸುಂದರ ರಾಜ ಮಾಡಿಧಂಗ ಎಡಗೈಯಿಂದ ಬಲಗೈ, ಬಲಗೈಯಿಂದ ಎಡಗೈ ಮುಟಗೋತ ಯಾವದು ಸರಿ ಆಗಬಹುದು ಅಂತ ವಿಚಾರ ಮಾಡಲಿಖತ್ತೆ.
***************************
No comments:
Post a Comment